ನಾನರಿತ ವಿಶ್ವಮಾನವ : ಬಸವಣ್ಣ ಬಸವಣ್ಣನವರು ಈ ಜಗತ್ತು ಕಂಡ ಮಹಾ ಮಾನವತಾವಾದಿ, ದಾರ್ಶನಿಕ, ಭಕ್ತಿ ಬಂಢಾರಿ, ಆದರ್ಶ ಆಡಳಿತಗಾರ, ಸಮಾಜ ಸುಧಾರಕರು, ಸಾಮಾಜಿಕ ನ್ಯಾಯದ ಕ್ರಾಂತಿಕಾರಿ ಮತ್ತು ವಚನಕಾರರಾಗಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಮಾಡಿದ ಸಮಾಜ ಸುಧಾರಣಾ ಕಾರ್ಯಗಳು ಮತ್ತು ಅವರ ಕ್ರಾಂತಿಕಾರಿ ವಿಚಾರಗಳು ೨೧ ನೇ ಶತಮಾನದಲ್ಲಿ ಬಹಳ ಪ್ರಸ್ತುತ ಎನಿಸುತ್ತವೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯವನ್ನು ಬಸವಣ್ಣನವರು ೧೨ನೇ ಶತಮಾನದಲ್ಲಿ 'ಅನುಭವ ಮಂಟಪ'ದ ಮೂಲಕವಾಗಿ ಯಾವುದೇ ಜಾತಿ, ಮತ, ಧರ್ಮ, ಮೇಲು ಕೀಳು ಎಂಬ ಭೇದ ಭಾವವಿಲ್ಲದೆ ಎಲ್ಲರೂ ಸೇರುತ್ತಿದ್ದರು. ಅಲ್ಲಿ ಶಿವ ಶರಣರು ಉತ್ತಮ ಸಮಾಜ ನಿರ್ಮಾಣ ಮಾಡುವ ಚರ್ಚೆಗಳನ್ನು ಮಾಡಿ, ಸಮಾಜಕ್ಕೆ ಮೌಲ್ಯಯುತವಾದ ಸಂದೇಶಗಳನ್ನು ನೀಡುತ್ತಿದ್ದರು. ಆ ಮೂಲಕವಾಗಿ ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಬಸವಣ್ಣನವರು ಪ್ರಮುಖ ಪಾತ್ರವಹಿಸಿದರು. ಬಸವಣ್ಣನವರು ತಮ್ಮ ಕಾಲಘಟ್ಟದಲ್ಲಿ ಕಂಡುಕೊಂಡ ತಪ್ಪು ತಡೆಗಳು, ಅಂಕು ಡೊಂಕುಗಳು ಮತ್ತು ಅಂಧಕಾರವನ್ನು ಹೋಗಲಾಡಿಸಲು ತಮ್ಮದೇ ಆದ ಹೊಸ ಶೈಲಿಯ ಜನಸಾಮಾನ್ಯರಿಗೆ ಅರ್ಥವಾಗುವಂತಹ ವಚನಗಳನ್ನು ರಚಿಸಿದರು. ಅವು ಸಾಮನ್ಯ ಜನರಿಗೂ ತಿಳಿಯವಂತಿದ್ದವು. ಹಾಗಾಗಿ, ಅವರು ವಚನ ಸಾಹಿತ್ಯದ ಮೂಲಕವಾಗಿ ಜನರ ಹೃದಯವನ್ನು ತಲುಪಿದರು. ಅನುಭವ ಮಂಟಪದಲ್ಲಿ ಬಸವಣ್ಣನವರು ಯಾವುದೇ ಲಿಂಗ ಭೇದವಿಲ್ಲದೆ ಶರಣ ಶರಣೆಯರಿಗೆ ತಮ್ಮ ಅನುಭವಗಳು ಮತ್...