ಮನಸ್ಸನ್ನೇ‌ ಮಾತಾಡಿಸಿದ‌ 'ಮನಸ್ಸು ಮಾತಾಡಿತು!'

 

ಕರೋನಾ‌ ಕಾರಣದಿಂದ ಶಾಲೆಗಳು ತೆರೆಯಬಾರದು ಎಂಬ ಆದೇಶದಿಂದ ಮುಂಜಾನೆ ಶಾಲೆಗೆ ಹೋಗುತ್ತೇವೆ. ವಿದ್ಯಾರ್ಥಿಗಳು ಚಂದನ‌ ವಾಹಿನಿಯಲ್ಲಿನ‌ ಪಾಠಗಳನ್ನು‌ ವೀಕ್ಷಣೆ ಮಾಡಿ ಅದರಲ್ಲಿ ನೀಡುವ ಮನೆಗೆಲಸ ಮಾಡಿಕೊಂಡು ಬಂದು ಚೆಕ್ ಮಾಡಿಸಿಕೊಂಡು,  ಶಾಲಾ ಕಾರ್ಯಾಲಯವನ್ನು ಸ್ವಚ್ಛಗೊಳಿಸಿ     ಹೋಗುತ್ತಾರೆ. ಇದು ಒಂದು ಗಂಟೆಯಾಗಬಹುದು. ಉಳಿದ ಈ ವಾರದ‌ ಸಮಯದಲ್ಲಿ‌ ನಮ್ಮ ಶಾಲಾ ಗ್ರಂಥಾಲಯವನ್ನು ಸ್ವಚ್ಚ ಮಾಡುವಾಗ ಎ. ಆರ್. ಮಣಿಕಾಂತ್ ರವರು ಬರೆದಿರುವ "ಮನಸ್ಸು ಮಾತಾಡಿತು" ಪುಸ್ತಕವನ್ನು  ಓದಿದೆನು. 


ಈ ಒಂದು ಪುಸ್ತಕ ಒಟ್ಟು ೩೩ ವಿಸ್ಮಯಕಾರಿ ವ್ಯಕ್ತಿಗಳ ಯಶಸ್ಸಿನ ಕಥೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಕಥೆಯು ನಮ್ಮನ್ನು ಓದಿಸಿಕೊಂಡು ಹೋಗುತ್ತವೆ. ಆ ಕಥೆಗಳು ಕಡು ಬಡತನದಲ್ಲಿ ಬೆಂದು, ನೊಂದು ಯಶಸ್ಸಿನ ಶಿಖರವನ್ನು ಏರಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅದರಲ್ಲಿ ನನಗೆ ಮನಸ್ಸನ್ನು ಕೊನೆಯವರೆಗೂ ಹಿಡಿದಿಟ್ಟ ಲೇಖನಗಳಾದ: ೧೧. ಈ ಸಿದ್ದಾರ್ಥ, ಕಲಾಂ ಅವರಿಂದ ಸಲಾಂ ಮಾಡಿಸಿಕೊಂಡ!, ೧೭. ಅಪ್ಪ ಹೇಳಿದ ಅಮೂಲ್ಯ ಗುಟ್ಟುಗಳು..... ೧೮. ಅಳೋದಿಲ್ಲ  ಅಂತ ಭಾಷೆ ಕೊಡು ಅಂದವನೇ ಕಥೆಯಾದ ಮೇಲೆ... ಇವುಗಳನ್ನು ಒದುವಾಗ ಅವುಗಳಲ್ಲಿನ ಪಾತ್ತಗಳಲ್ಲಿ ನಾನು ಒಂದಾಗಿ ಬಿಟ್ಟೆ. ಅವು ನೀಡಿದ ಖುಷಿ ಅಷ್ಟಿಷ್ಟಲ್ಲ.  ಇನ್ನೊಂದು ಲೇಖನ ೨೪. ನಮ್ಮ ಅತ್ತೆಗೆ ಸ್ವಲ್ಪ ವಿಷ ಕೊಡಿ!!! . ಇದು ಒಂದು ತರದ ಸಸ್ಪೆನ್ಸ್ ಕಥೆಯಾಗಿ ನನಗೆ ಅನಿಸಿದೆ.   

ಎ. ಆರ್. ಮಣಿಕಾಂತರ ಈ ಪುಸ್ತಕದ ಪ್ರತಿಯೊಂದು ಲೇಖನಗಳು ಕೊನೆಯಲ್ಲಿ ಒಂದು ಆಶಾಭಾವವನ್ನು ಹುಟ್ಟಿಸುತ್ತವೆ. ಇದರೊಂದಿಗೆ ನಾನು ಹಲವಾರು ಮೌಲ್ಯಗಳನ್ನು ಕಲಿತುಕೊಡಿದ್ದೇನೆ.  ನಾನು ಈ ಶಾಲೆಗೆ ಬಂದಾಗಿನಿಂದ ಪೂರ್ತಿಯಾಗಿ ಓದಿದ ಮೊದಲ ಪುಸ್ತಕವಾಗಿದೆ. ಈ ಕರೋನಾದಿಂದ ಶಾಲೆಯಲ್ಲಿ ಓದಿಗೆ ಹೆಚ್ಚಿನ‌ ಸಮಯ ಸಿಗುತ್ತಿದೆ. ನಮ್ಮ ಶಾಲಾ ಗ್ರಂಥಾಲಯದಲ್ಲಿ ಇಂತಹ ಹೋಸ ಮತ್ತು ಹಳೆಯ ಪುಸ್ತಕಳಿವೆ. 

Comments

Popular posts from this blog

ನೈತಿಕ ಮೌಲ್ಯ ಆಚರಣೆಯಲ್ಲಿರಲಿ.

ಅಜ್ಜನ ನೆನಪು : ಭಾಗ -೧ ಅಜ್ಜನ ನಂಟು ಹರಿಯಲಾರದ ಗಂಟು